ನೋಡಿ ಸ್ವಾಮಿ ನಾವ್ ಇರೋದು ಹೀಗೆ !!!
ಹಾಡು ಕೇಳಿರಬೇಕು ಅಲ್ವ?
ನಮ್ಮ ಗೆಳೆಯರು ಶುದ್ಧ ಪರಿಶುದ್ಧ ಕನ್ನಡದಲ್ಲಿ ಪೋಸ್ಟ್ ಮಾಡಿದ್ರೆ ಏನಂತೆ?
ನಾನಿದಿನಲ್ಲ ನಿಮ್ ಪ್ರೊಫೆಸರ್ ಹುಚ್ಚುರಾಯ
ಇತ್ತೀಚೆಗೆ ಒಂದ್ ಮಾತು ಕೇಳ್ದೆ ..
ಬೆಂಗಳೂರಿನಲ್ಲಿ ಮುಂದಿನ ವರ್ಷ ಮಂಜು ಬೀಳತ್ತಾ ? ಒಂದ್ ೧೦ ವರ್ಷಕ್ಕೆ ಇಲ್ಲಿ ಬೀಚ್ ಇರತ್ತಾ ಅಂತ?
ಎಲ್ಡು ಮುದ ನೀಡೊ ಮಾತೆ ಸರಿ. ಅದ್ರೆ ಬೀಚ್ ಬೆಂಗಳೂರಿಗೆ ಬರಬೇಕು ಅಂದ್ರೆ ಈಗಾಗಲೇ ಮಿತಿ ಮೀರಿರೋ ಸ್ಥಿತಿ ಇನ್ನೆಷ್ಟು ಹದಗೆಡ್ಬೇಕು ಅಂತ ಬೇಜಾರ್ ಆಯ್ತು.
ಯಾರಿಗ್ ಬೀಕ್ರಿ ಮಂಜು ಬೀಚು? ಬೇಕಾದ್ರೆ ಒಂದ್ ಎರಡ್ ದಿವ್ಸ ಎಲ್ಲಾದ್ರು ಹೋಗಿ ಬರೋಣ,
ಸೂಪರಾಗಿರೋ ಬೆಂಗಳೂರನ್ನ ಯಾಕ್ರೀ ಕೆಡಸಬೇಕು?
ನಮ್ಮ ಬಳಗಕ್ಕೆ ಯಾರಾದ್ರು ನಗಿಸೋರು ಬಂದ್ರೆ ಚನಾಗಿರುತ್ತೆ.
ಪ್ರೇಮ ಕವನ, ಪುಸ್ತಕ ವಿಮರ್ಶೆ, ತಮ್ಮದೇ ಕಥೆಗಳನ್ನೂ ಕಳಿಸಿದ್ರೆ ಚನಾಗಿರುತ್ತೆ.
ಬರಿ ಇದೆ ಸೀರಿಯಸ್ ಗೊಳ್ ಯಾರಿಗ್ ಬೇಕು ಹೇಳಿ ?
ಮತ್ತೆ ಸಿಗಣ...
ಅಲ್ಲಿ ತನಕ
ಭಾಷೆ ಬೆಳೆಸಿ, ಊಟ ಮಾಡಿ, ಸಖತ್ತಾಗಿರಿ..
----------------
Now playing: Manasa Sarovara-spb hits
Wednesday, December 12, 2007
Subscribe to:
Post Comments (Atom)
No comments:
Post a Comment