ಸಮಯದ ಕೊರತೆಯಿಂದ ನಮ್ಮ ಮಿತ್ರರು ತಮ್ಮ ಬರವಣಿಗೆಗಳನ್ನು ಪ್ರಕಟಗೊಳಿಸಿಲ್ಲವೆನಿಸುತ್ತದೆ.
ಹಾಗಾದರೆ ಶ್ರೀ ಗಣೇಶ ನನ್ನಿ೦ದಲೆ ಆಗಲಿ.
ನಮಸ್ಕಾರ.
ಇತ್ತೀಚೆಗೆ ಕನ್ನಡ ಪರ ಸಂಘಟನೆಗಳು ಬೆಂಗಳೂರಿನ ಅರಮನೆ ಮೈದಾನದಲ್ಲಿ ಸೇರಿದ್ದರು. ಅಷ್ಟೆಲ್ಲ ಭಾಷೆಯ ಬಗ್ಗೆ ಹೌಹಾರಿದರೂ ಇಂದು ಕನ್ನಡಕ್ಕೆ ಪ್ರಾಶಸ್ತ್ಯ ದೊರಕಿಲ್ಲ.
ದೆಹಲಿಯ ವರ್ತಕರಿಂದ ಕಲಿಯಬೇಕಾದ ಒಂದು ಸಣ್ಣ ಪಾಠವಿದೆ : ತಮ್ಮ ತಮ್ಮ ಅಂಗಡಿಗಳಲ್ಲಿ ಅವರು : hindi speakers will be given first preference ಅಂತ ದೊಡ್ಡದಾದ ಫಲಕವನ್ನು ಪ್ರದರ್ಶಿಸಿರುತ್ತಾರೆ. ಎಲ್ಲಿಗೆ ಹೋಗಿ, ಯಾರೊಡನೆಯು ಹಿಂದಿಯಲ್ಲಿ ಮಾತನಾಡಿಸಿದರೆ/ಮಾತನಾಡಿಸಲು ಪ್ರಯತ್ನ ಮಾಡಿದರೆ ನಿಮಗೆ ಧಾರಾಳವಾಗಿ ಸ್ಪಂದಿಸುವರು. ಹಿಂದಿ ಬಂದರು, ಮಾತನಾಡದೆ ಇಂಗ್ಲಿಶಿನಲ್ಲೋ ಮತ್ತಯವುದೋ ಭಾಷೆಯಲ್ಲೋ ಮಾತನಾಡಿಸಿದರೆ ಕಾಣಿಸಿದರು ಕಾಣದಂತೆ ಮುನ್ನಡೆಯುತ್ತಾರೆ.
ನಮ್ಮ ಬೆಂಗಳೂರಿನಲ್ಲಿ ಹಾಗಲ್ಲ, ನೀವು ಯಾವ ಭಾಷೆಯಲ್ಲೇ ಪ್ರಶ್ನೆ ಕೇಳಿರಿ, ನಿಮಗೆ ಇಂಗ್ಲಿಷ್ನಲ್ಲೇ ಉತ್ತರ ಸಿಗುತ್ತೆ.
ಈ ಪರಿಸ್ಥಿತಿ ಇರುವುದೇಕೆ೦ದರೆ ನಾವು ಪಾಠಶಾಲೆಗಳಲ್ಲಿ ಕನ್ನಡ ಕಲಿತೆವೆ ಹೊರತು ಅದನ್ನು ಪ್ರೀತಿಸಲ್ಲಿಲ್ಲ. ನಾವು ಇದನ್ನು ಬದಲಾಯಿಸಲೇ ಬೇಕು. ಯೆನ೦ತಿರ?
ಆದರು ನನಗೆ ಕನ್ನಡದ ಪ್ರೀತಿ ಹುಟ್ಟಿಸಿದ ಶ್ರೀ ಗುರುರಾಜ್, ಶ್ರೀ ಕೃಷ್ಣಮೂರ್ತಿ, ಶ್ರೀ ಶ್ರೀನಿವಾಸ ಶರ್ಮ.
ಇವರೆಲ್ಲರೂ ಕನ್ನಡವನ್ನು ವಿಷಯವೆಂದು ಭಾವಿಸದೆ ಅದನ್ನು ಹಾಡಿ, ನಟಿಸಿ, ಕುಣಿದು-ಕುಪ್ಪಳಿಸಿ ಮನವರಿಕೆ ಮಾಡಿಕೊಟ್ಟು, ಕನ್ನಡ ಅಭಿಮಾನ ಮತ್ತೆ ಅದರ ಸುಗಂಧವನ್ನು ಮತ್ತಷ್ಟು ದೂರ ಸಾರಿದವರು.
ಅವರನ್ನು ನಾನು ಇಲ್ಲಿ ನೆನಯುತ್ತೇನೆ. ಇಂತಹ ಒಳ್ಳೆಯ ಶಿಕ್ಷಕರನ್ನು ದಿನನಿತ್ಯ ನೆನೆದರೆ ತಪ್ಪಾಗಲಾರದು.
ಇವರ ಶಿಷ್ಯರಾಗಿ ನಾವು ಕನ್ನಡವನ್ನು ದಿನನಿತ್ಯ ಪ್ರಯೋಗಿಸಿದರೆ ನಮ್ಮ ಕರ್ತವ್ಯ ಮಾಡಿದಂತೆ ಆಗುತ್ತದೆ.
ಮು೦ದಿನ ಸಂಚಿಕೆಯ ವರೆಗೆ ಕಾದು ನೋಡಿ.
ನಿಮ್ಮ ಆದಿತ್ಯ
----------------
Now playing: 23 - Ananda
http://foxytunes.com/artist/23/track/ananda
Saturday, December 1, 2007
Subscribe to:
Post Comments (Atom)
No comments:
Post a Comment