Sunday, December 2, 2007
ಹಸಿರು ಪ್ರಯಾಣ - Green trek.
ಒಂದು ಹೊಸ ಅನುಭವ. ಹಸಿರು ದಾರಿಯಲ್ಲಿ ಕಾಲು ಹಾಯ್ದು ಹೋಗುತ್ತಿದ್ದಂತೆ ಮನಸ್ಸು ಒಂದು ಸುಂದರ ಲೋಕವನ್ನು ಪ್ರವೇಶಿಸಿತ್ತು. ಆಹಾ "ಸ್ವರ್ಗವೇ ಧರೆಗಿಳಿಯಿತು" ಎಂಬ ಮಾತಿನ ಅನುಭವ ಅಂದು ನನಗೆ ಆಯಿತು. ನಾನು ಮಾತನಾಡುತಿರುವುದು ಸಕಲೇಶಪುರದಿಂದ ಕುಕ್ಕೆ ಸುಬ್ರಮಣ್ಯಕ್ಕೆ ಹೋಗುವ ದಾರಿಯ ಬಗ್ಗೆ. ಇಂದು ಮುಜಾನೆ ದಿನ ಪತ್ರಿಕೆಯಲ್ಲಿ ಡಿಸೆಂಬರ್ ೮ರಿಂದ ರೈಲುಗಳು ಈ ಮಾರ್ಗವಾಗಿ ಹೋಗಲಿದೆ ಎಂದು ತಿಳಿದೊಡನೆ ನಾನು ನಿಜವಾಗಿಯು ಕಳೆದ ತಿಂಗಳು ಈ ಮಾರ್ಗವಾಗಿ ನಡೆದು ಹೋದದ್ದು ನೆನಪಾಯಿತು. ಸುಮಾರು ೫೦ ಕಿಲೋಮೀಟರು ನಡೆದಿರಬಹುದು. ಎರಡು ದಿನ ಈ ಪಟ್ಟಣದ ದೊಮ್ಬಿಯಿಂದ ದೂರ ಪ್ರಶಾಂತ ವಾತಾವರಣದಲ್ಲಿ ನಮ್ಮದೇ ಆದ ಸುಂದರ ಲೋಕವನ್ನು ಸೃಷ್ಟಿಸಿ ಕೊಂಡಿದ್ದೆವು. ಅದು ರೈಲು ಮಾರ್ಗ. ಈಗ ಅಲ್ಲಿ ಮತ್ತೆ ನಡೆದುಕೊಂಡು ಹೋಗಲು ಅನುಮತಿ ನೀಡುವುದು ಅನುಮಾನವೇ. ಯಾಕೆಂದರೆ ನಾವು ಹೋಗುವಾಗ ಬರಿ ಗೂಡ್ಸ್ ರೈಲುಗಳು ಸಂಚಾರವಿತ್ತು. ಈಗ ಬೆಂಗಳೂರಿನಿಂದ ಮಂಗಳೂರಿಗೆ ಪ್ರಯಾಣಿಕರ ರೈಲುಗಳ ಪ್ರವಾಸ ಆರಂಭವಾಗಲಿದೆ. ಆದರೆ ಆ ದಾರಿಯಲ್ಲಿ ಇರುವಂಥ ಪ್ರಕೃತಿ ಸೌಂದರ್ಯ ಕಣ್ಣಿಗೆ ತಂಪನ್ನು ನೀಡಿತು. ಇದು ನನ್ನ ಕನಸುಗಳಲ್ಲಿ ಒಂದಾಗಿತ್ತು ಎಂದು ಹೇಳಿದರೆ ತಪ್ಪಾಗಲಾರದು. ಮಳೆಗಾಲ ಆಗತಾನೆ ಮಳೆಗಾಲ ಮುಗಿಯುತಿದ್ದರಿಂದ ಕಾಡಿನಿಂದ ನೀರು ಹರಿದು ಚಿಕ್ಕ ಜಲಪಾತಗಳು ಸೃಷ್ಟಿಯಾಗಿ ಪ್ರಯಾಣದ ಆಯಾಸವನ್ನು ನೀಗಿಸಲು ಅನುಕೂಲ ಮಾಡಿಕೊಟ್ಟಿತು ಆ ಪ್ರಕೃತಿ. ಆ ೨೫೦ ಅಡಿ ಎತ್ತರದ ಸೇತುವೆಗಳ ಮೇಲೆ ನಡೆದು ಹೋಗುತ್ತಿದಂತೆ ಒಂದು ಹೊಸ ರೀತಿಯ ರೋಮಾಂಚನ ತನುಮನಗಲ್ಲನ್ನು ಆವರಿಸ್ತು. ರೈಲುಬಂದರೆ ಗತಿಯೇನು ಎಂದು ಯೋಚಿಸಲು ಆಸದ್ಯವಾಗುವಸ್ತು ಸಂತೋಷ ಮನಸನ್ನು ತುಂಬಿತ್ತು. ದೋಣಿಗಲ್ ನಿಂದ ಹೊರಟಾಗ ಎಲ್ಲರು ನಾವು ಕುಕ್ಕೆ ಯನ್ನು ಮುಟ್ಟುವುದು ಬರಿಗಾಲಿನಲ್ಲಿ ಮುಟ್ಟುವುದು ಅಸಾಧ್ಯ ಎಂದು ಹೇಳಿದರು. ಆದರೆ ನಾವು ಅವರನ್ನು ತಪ್ಪುಗಳೆದೆವು. ಆ ಸೌಂದರ್ಯ ನಾವು ದಿಕ್ಕರಿಸಿ ಬರುವಂಥಹ ಮನಸ್ಸು ನಮಗೆ ಇರಲಿಲ್ಲ. ಹಾಗಾಗಿ ೫೦ ಕಿಲೋಮೀಟರು ನಡೆದರೂ ಆ ದಣಿವಿನಲ್ಲಿ ಒಂದು ಸಂತಸ, ಸಮಾಧಾನ ಹಾಗು ಸಾಧನೆಯ ಭಾವವಿತ್ತು. ಮತ್ತೆ ಆ ದಾರಿಯಲ್ಲಿ ಹೋಗುವುದು ಕಚಿತ ಆದರೆ ಅದು ಉಗಿಬಂಡಿಯ ಪ್ರಯಾಣ ಆಗಬೇಕೇ ಹೊರತು, ಆ ದಾರಿಯಲ್ಲಿ ನಡೆಯುವ ಸದಾವಕಾಶ ದೊರಕುವುದು ಕಷ್ಟ. ಒಂದು ಬಾರಿಯಾದರೂ ಹೋಗಿದ್ದೆ ಎಂಬ ಸಮಾಧಾನ. ಇಲ್ಲಿಗೆ ನನ್ನ ಪ್ರಯಾಣದ ಕಥೆಯನ್ನು ಮುಗಿಸುಥೆನೆ. ಮತ್ತೆ ಹೊಸ ವಿಚಾರಗಳೊಂದಿಗೆ ಭೇಟಿಯಾಗೋಣ. ನಮಸ್ಕಾರ.
Subscribe to:
Post Comments (Atom)
No comments:
Post a Comment