Saturday, April 12, 2008

BREAKING NEWS!!!!!!!!!!!!!!!!!!!!!!!!!

ಸ್ಕೂಲಿನಲ್ಲಿ ನಮಗೆ ವ್ಯಾಕರಣವನ್ನು ಪಾಠ ಮಾಡುವಾಗ ಅಧ್ಯಾಪಕರು ವಾರ್ತೆಗಳನ್ನು ನೋಡಿ ಬಹಳ ಸ್ವಚ್ಹ ಉಚ್ಚಾರಣೆ ಮತ್ತೆ ಉತ್ಕೃಷ್ಟವಾದ ವ್ಯಾಕರಣ ಕಲಿಯಬಹುದು ಎಂದು ಹೇಳ್ಳುತ್ತಿದರು.

ಮೊನ್ನೆ ಯಾವುದೊ ಖಾಸಗಿ ಚಾನಲ್ ನ್ಯೂಸ್ ನೋದುತಿದ್ದೆ..
ಅಲ್ಲಿ ವರದಿಯಾಗುತ್ತಿದ ವಾರ್ತೆಗಳು ನನಗೆ ನಮ್ಮ ಅಧ್ಯಾಪಕರು ಹೇಳಿದ್ದ ಆ ಮಾತುಗಳು ಎಷ್ಟು ಹುಸಿಯಾಗಿವೆ ಇಂದು ಎನಿಸಿತು..

ಒಂದು ಉದಾಹರಣೆ ಕೊಡುತ್ತೇನೆ ( ಇದು ಯಾವುದೇ ನಿಜ ವ್ಯಕ್ತಿ/ ಘಟನೆಗೆ ಸಂಬಂದಿಸಿದಲ್ಲ )
ಬ್ರೇಕಿಂಗ್ ನ್ಯೂಸ್:: ಹಾರೋಹಳ್ಳಿ ತಾಂಡ , ಬಿಜಾಪುರ್ : ಒಂದು ಆಟೋ ರಿಕ್ಷಾ ಒಂದು ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದ ಕಾರಣ ಅವನು ಗಟರಿನಲ್ಲಿ ಬಿದ್ದನು.. ಯಾವುದೇ ಆಸ್ತಿ ಪಾಸ್ತಿಗೆ ಹಾನಿಯಾಗದಿದ್ದರು .. ಗಟರಿನಲ್ಲಿ ಮಲಗಿದ್ದ ನಾಯಿಮರಿಯ ಒಂದು ಕಾಲು ಮುರಿದಿದೆ ..

ಮತ್ತಷ್ಟು ಬಿಸಿ ಸುದ್ದಿ ಬ್ರೇಕ್ ನ ನಂತರ
follow up
live call from harohalli

ಮಹೇಶ reporting: ಈಗ ಇಲ್ಲಿ ಸ್ಥಿತಿ ಚಿಂತಾಜನಕವಾಗಿದೆ . PeTA ಕಾರ್ಯಕರ್ತರು auto ಚಾಲಕರು ಮತ್ತೆ ಸೈಕಲ್ ಸವಾರರ ಮೇಲೆ ಹಲ್ಲೆ ನಡೆಸಿ ಒಂದು ಸೈಕಲ್ ಹಾಗು ಒಂದು ಆಟೋ tyre puncture ಮಾಡಿದ್ದರೆ . ಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೋಲೀಸರು Rs 500 ಲಂಚ ಕೆಳುತಿದ್ದರೆ .
ಇದ್ದರಿಂದ ಊರಿನ ಜನತೆಗೆ ಬಹಳ ನೋವು ಉಂಟಾಗಿ ನಾಳೆ ಹಾರೋಹಳ್ಳಿ ಬಂಧ ಘೋಷಿಸಿ , ರಾಜ್ಯಪಾಲರ ಮನೆ ಘೇರಾವ್ ಮಾಡಲಿದ್ದಾರೆ
over to ಸ್ಟುಡಿಯೋ...

(ಯಾವುದೇ ಖಾಸಗಿ ಅಥವ ಸರ್ಕಾರಿ ಸಂಘಟನೆಗೆ ನಾನು ದಕ್ಕೆ ತರುವ ಉದ್ದೇಶದಿಂದ ಇದನ್ನು ಬರೆದಿಲ್ಲ.. ದಯವಿಟ್ಟು ಹಾಸ್ಯಗಾರನ ಒಂದು ಪ್ರಾಮಾಣಿಕ ಪ್ರಯತ್ನ ಎಂದು ಹೊಟ್ಟೆಗೆ ಹಾಕೊಳ್ಳಿ ..

ಅಯ್ಯೋ ಇಲ್ಲ ಅಂದ್ರೆ ಬಿಡಿ ,, ನಂದೇನು ಹೋಗತ್ತೆ ಕತ್ತೆ ಬಾಲ? ನನ್ನ ಖುದ್ದಾಗಿ ಸಿಕ್ಕಾಗ ಒಂದೆರಡ್ ಮಾತು ಅಂದಿ ತೀರಸ್ಕೊಳ್ಳಿ ok ನಾ ? )

Tuesday, April 8, 2008

ಕೇಳದೇ ನಿಮಗೀಗ ದೂರದಲ್ಲಿ ಯಾರೋ ?........

ಎಷ್ಟು ಸತಿ ಈ ಹಾಡು ಕೇಳಿದರು ಹೃದಯದಲ್ಲಿ ಏನೋ ಗೊಂದಲ, ಏನೋ ಆಸೆ, ಉಕ್ಕಿ ಹರಿಯುವಂತೆ..
ಜೀವನದಿ ನಡಿಯುತ್ತ ಇಲ್ಲಿಯ ವರೆಗೆ ಸಾಗುತ್ತ ಬಂದಿದೆ ಒಂಟಿ ಸವಾರಿ. ಹೇಳಬೇಕಂದರೆ ನೂರು ನೂರು ಸಂಷಯಗಳು. ಈ ಸುಂದರ ಮೈತ್ರಿಯ ಕಳೆದುಕೊಳ್ಳುವ ಹೆದರಿಕೆ. ಸಮಯ ಸಂಧರ್ಬ ದ ಸುಳಿಯಲ್ಲಿ ಸಿಲುಕಿ ಒಂದು ಪುಟ್ಟ ಮಲ್ಲಿಗೆ ಹೂವು ಬಾಡುವಂತಿದೆ.

ಹೃದಯದಲ್ಲಿ ಒಂದು ಹಾಡು ಮೂಡಿ.
ನಿನ್ನ ಕರವ ಪಿಡಿಯಲು ಬೇಡಿ.

ಕೇಳಲು ಹೆದರುವೇನು ನಿನ್ನನ್ನು
ಮಲ್ಲಿಗೆಯೇ,
ನೋಡು ನಿನ್ನ ಮೈತ್ರಿಯ ಮೋಡಿ .

ಹೇಗೆ ಹೇಳಲಿ ಮನಸ ಮಾತನ್ನು ?
ಪದ್ಯ-ಗದ್ಯಗಲೆಲ್ಲವು ಸುಳ್ಳೇ ಸರಿ
ಕೇಳುವೆಯಾ ಕಿವಿಗೊಟ್ಟು
ಹೃದಯ ಮೀಟುವ ಈ ಪರಿ?

ಮತ್ತೆ ಬಾ ಕನಸಲ್ಲಿ ಇಂದು
ಕಾಣಲು ಕಾತುರ, ನಿನ್ನ
ಎನ್ನ ಜೀವನದ
ಕೇಂದ್ರ ಬಿಂದು..

ಕಾದಿರುವೆ ನಿನಗೊಸ್ಕರ ಪೂರ್ಣಿಮೆಯಂದು.