Tuesday, February 26, 2008

ಹುಸಿ ಮುನಿಸೆ,ನಿಜ ಮುನಿಸೆ?

ಹುಸಿ ಮುನಿಸೆ,ನಿಜ ಮುನಿಸೆ?

ಕೋಪಿಸಿಕೊಂಡ ಹೆಂಡತಿಯನ್ನು ರಮಿಸುವ ಪತಿಯ ಮಾತುಗಳಿವು.... :)


ಹುಸಿ ಮುನಿಸೆ,ನಿಜ ಮುನಿಸೆ?
ತರವಲ್ಲ ಬಿಡು ಗೆಳತಿ...
ನನ್ನ ದೂರ ತಾಳ್ಳೊ ಮನಸೇ...
ನಗೆ ತೊರೆದ ನಿನ್ನ ಮೊಗದಿ

ಚಂದಿರ ಬಂದಾಯ್ತು, ತೆಂಗಿನ ಮೇಲೆ
ಸರಸರನೆ ತೊಡಿಸೆ ತೋಳಿನ ಮಾಲೆ...
ಎದೆ ಬಡಿತ ಹೆಚ್ಚಾಯ್ತು,ಸೊಕಲು ನಿನ್ನ ಜುಮುಕಿ,
ಎಳೆಎಳೆಯಾಯ್ತು ಮನಸಿನಾ ಗಮಕಿ

ಈ ಮೌನವ ಇಂದಿಲ್ಲೆ ಮುಗಿಸೇ,
ಹಾಡೊಂದು ಮೊಳಗಿದೆ ಈ ಮನದಿ


ಕೆಂಪಾದ ತುಟಿಯಲ್ಲಿ,ವೀಳ್ಯ ಕೆಂಪು
ದುರ್ಗಿಯ ಕ್ಷಣ ಮರೆತು, ತಾರೆಯ ತಂಪು
ಹೊದಿಸಲೆ ನಿಂಗೆ ಪ್ರೀತಿಯ ಚಾದರ
ಎಣಿಸಿ ಪೋಣಿಸಲೇ ಮುತ್ತು ಸಾವಿರ

ಮಲ್ಲೇ ಹೂವ ನೀ ಮುಡಿಸೆ,
ಮುತ್ತಿಟ್ತ ನಿನ್ನ ಮುಡಿಗೆ

1 comment:

Sushrutha Dodderi said...

ಪ್ರಿಯರೇ,

ನಮಸ್ಕಾರ. ಹೇಗಿದ್ದೀರಿ?

ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ