ಮತ್ತೇನ್ ಶಿವಾ ಹೊಸ ಸುದ್ದಿ ಅಂತ ಕೇಳ್ತಿರಾ?
ಏನು ಇಲ್ಲ ಗುರುಗಳೇ.. ಅದೇ ಹಳೆ ಕಥೆ patient ಗೆ ಅದೇ ಹೆಂಡತಿ ಮಾತ್ರ ಕಾಣಿಸುತ್ತಿಲ್ಲ , ಪಕ್ಕದ ಮನೆಅವ್ರ್ಣ ನೋಡಿದ್ರೆ ಕಣ್ಣು ಕೆಂಪಾಗಾತು, ಈರುಳ್ಳಿ ಹೆಚ್ಚಿದರೆ ಕಣ್ಣೀರ್ ಜಾಸ್ತಿ ಬರತ್ತೆ .. ಮಕ್ಕಳ ತಲೆ ನೋವು..ಹುಡುಗಿಗೆ sight ಹೊಡಿಯುವಾಗ ಕಣ್ಣಲ್ಲಿ ಕಲ್ಲು ಬಿತ್ತು..
ಮತ್ತೆ ಅವಾಗ ಅವಾಗ campಗೆ ಹಾಕ್ತಾರೆ.. ಸುಪರಾಗಿರತ್ತೆ.. ಫಿಲ್ಟರ್ ಕಾಫಿ .. ಇಡ್ಲಿ ದೋಸೆ ವಡೆ ಎಲ್ಲ free camp ನಡೆಸೋರ್ ಖರ್ಚು.. ಒಂದ್ ತರ ಮಜಾನೆ ಅ೦ಕೊಳಿ.
ಜಾಸ್ತಿ ಜಾಸ್ತಿ ಕೇಸು ಬರ್ತವೆ.. ಹೊಸ ಹೊಸ ಪಾಠ ಕಲಿತಿವಿ.
ಊಟ, ಪಾಠ, ಬೆಳಗ್ಗೆ ಓಟ ಒಂದ್ ತರಾ ಚನಾಗಿದೆ.
ದಿನಾ ಸಾಯಂಕಾಲ 5-6 ಕ್ಲಾಸ್ ಇರತ್ತೆ ಹೇಳಿದೆಲ್ಲ ತಲೆ ಮೇಲೆ ಹಾರಿ ಹೋಗತ್ತೆ. ರೂಮ್ನಲ್ಲಿ ರಾತ್ರಿ ಪುಸ್ತಕ ತಗೆದು ಓದಿದ್ರೆನೆ ಅರ್ಥ ಆಗೋದು. ಬೆಪ್ಪು ತಕಡಿ ಸಲ್ಪ ಅದಕ್ಕೆ.
ಹಾಸ್ಟಲ್ನಲ್ಲಿ ಹಾಡ ಕೀಳ್ತೀನಿ sunday ನಿದ್ದೆ ಹೊಡಿತೀನಿ.
internet ಇಲ್ಲ ಅನ್ನೋದ್ ಬಿಟ್ರೆ ಬೇರೆ ಎಲ್ಲ ಸೂಪರ್.
ಕೃಷ್ಣ ದಾಸ್ ಅಂತ ಒಬ್ರು ಟೀಚರ್ ಇದಾರೆ . ಬಹಳ ಒಳ್ಳೆಯವರು.. ಯಾವಾಗಲು ನಗ್ತಾರೆ
ಸೂಪರಾಗಿ ಪಾಠ ಮಾಡ್ತಾರೆ. ಇದ್ರೆ ಅವ್ರ ಹಂಗೆ ಇರ್ಬೇಕು ಅನ್ನಿಸುತ್ತೆ ..
ಇವತ್ತು ಸಿಕ್ಕಿದರು ಏನೋ doubt ಕೀಳದೆ ಪಟ ಪಟ ಅಂತ ಉತ್ತರ ಹೇಳಿದ್ರು.
ಅದು ಏನು ತಲೆನೋ info ಮಹಾಸಾಗರನೋ ಅರ್ಥವೇ ಆಗಲ್ಲ.
ಓದಾಕೆ ಹೊತ್ತ ಆಯಿತು ಬರ್ತೀನಿ ..
ಮತ್ತೆ ಸಿಗಣ..
Wednesday, August 6, 2008
Subscribe to:
Post Comments (Atom)
1 comment:
yen daactor-e.. swalpa interesting suddi helri..
ee filler kaafi, idli dose yella haledaitu
Post a Comment